ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

19 ಸೆಪ್ಟೆಂಬರ್ 2011

ಡಿ.ವಿ. ಜಿ. ರವರ ಕಗ್ಗಗಳು

ಜಗದಿ ಬಂದೀಗೃಹದಿ ಬಿಗಿಯುತಿದೆ ವಿಧಿ ನಿನ್ನ |
ನಿಗಮ ಸತ್ಯಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು |
ನಗುನಗಿಸಿ ಲೋಕವನು - ಮಂಕುತಿಮ್ಮ ||

ವಿಧಿಯು ನಮ್ಮೆಲ್ಲರನ್ನು ಈ ಪ್ರಪಂಚವೆಂಬ ಸೆರಮನೆಯಲ್ಲಿ ಬಂಧಿಸಿ ಇಟ್ಟುಬಿಟ್ಟಿದೆ. ಯಾವುದೇ ಕಾರಣಕ್ಕೂ ನಾವು ಈ ಸೆರಮನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ !!! ಆದರೆ ಈ ಸೆರಮನೆಗೆ ಕಲೆ-ಪ್ರೀತಿ-ದ್ವೇಷಾಸೂಯೆ-ಕಾವ್ಯಗಳೆಂಬ ಕಿಟಕಿಯಿದೆ. ಆ ಕಿಟಕಿಯ ಮೂಲಕ ಆನಂತ ದರ್ಶನ ಮಾಡಬಹುದು. ಆದರೆ ಅದರಲ್ಲಿ ದ್ವೇಷಾಸೂಯೆ ಗಳನ್ನು ಬಿಟ್ಟು ಉಳಿದವುಗಳಿಂದ ಲೋಕವನ್ನು ನಗಿಸಿ, ಎಲ್ಲರ ಪ್ರೀತಿ - ಕೃಪೆಗೆ ಪಾತ್ರರಾಗಿ ಮುಕ್ತಿಯನ್ನು ಹೊಂದೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ