ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

31 ಜುಲೈ 2011

ಮದರ್ ಥೆರೆಸಾ

"ನನ್ನ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುವುದಕ್ಕಿಂತ; ನಾನು ಮಾಡುವ ಕಾರ್ಯದಲ್ಲಿ ನನಗೆ ವಿಧೇಯತೆ ದಯಪಾಲಿಸು ಎಂದು ಬೇಡುತ್ತೇನೆ. ---ಮದರ್ ಥೆರೆಸಾ"

16 ಜುಲೈ 2011

ಎಮರ್‍ಸನ್

ಮಾತು ’ತಪ್ಪ’ದ ಹಾಗೆ ನೋಡಿಕೊಳ್ಳಬೇಕಾದರೆ ನೀವು ಯಾರ ಜೊತೆ-ಯಾವಾಗ, ಎಲ್ಲಿ ಹಾಗೂ ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ.


ಕ್ರಿಸ್ಟೋಫರ್ ರೀವ್

ಹೆಚ್ಚಿನ ಕನಸುಗಳು ಮೊದಲು ಅಸಾಧ್ಯ ಎಂದೇ ತೋರುತ್ತವೆ. ಆದರೆ ಅವುಗಳನ್ನು ನನಸು ಮಾಡಲು ನಾವು ಮನಸ್ಸು ಕೊಟ್ಟಾಗ ಅವುಗಳು ನಮಗೆ ಅನಿವಾರ್ಯವಾಗಿ ಬಿಡುತ್ತವೆ.

ಎಡ್ವರ್ಡ್ ಯಂಗ್

"ಹೃದಯವಂತಿಕೆ ಇಲ್ಲದಿರುವಾಗ ಬುದ್ಧಿವಂತಿಕೆ ಎಷ್ಟಿದ್ದರೂ ಪ್ರಯೋಜನವಾಗದು"- ಎಡ್ವರ್ಡ್ ಯಂಗ್

ಇಲಿಯಟ್

ಯಾವುದೇ ಕೆಲಸವಾದರೂ ಅದರಲ್ಲಿ ತಲ್ಲಿನರಾದಾಗ ಮಾತ್ರ ಅದು ಪ್ರಯೋಜನಕಾರಿಯಾಗುವುದು-ಇಲಿಯಟ್

ಥಾಮಸ್ ಪುಲ್ಲರ್

ಜ್ಞಾನವೆಂಬುದು ಒಂದು ಖಜಾನೆ, ಅಭ್ಯಾಸವೆಂಬುದು ಅದರ ಕೀಲಿ- ಥಾಮಸ್ ಪುಲ್ಲರ್

ಮಹಾಭಾರತ

ಯೋಗ್ಯತೆಗೆ ಕುಲರೂಪಗಳು ಕಾರಣವಲ್ಲ, ಉತ್ತಮರಾಗಲೀ, ಅಲ್ಪರಾಗಲೀ, ತಮ್ಮ ಕಾರ್ಯದಿಂದ ಶ್ರೇಷ್ಠ ರಾಗುವರು" -ಮಹಾಭಾರತ

08 ಜುಲೈ 2011

ಮನುಸ್ಮೃತಿ

ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

ಟಿ.ಪಿ.ಕೈಲಾಸಂ,

ವಿನಾಶಕಾಲೇ ವಿಪರೀತ ಸಿಧ್ಧಿ

ಗೆಲಿಲಿಯೊ

ಕೊಂಬಿಲ್ಲದ ದನಗಳು ಗ್ರಾಮಗಳಲ್ಲಿ ಇರುತ್ತವೆ. ಮೆದುಳಿಲ್ಲದ ಜನಗಳು ಪಟ್ಟಣಗಳಲ್ಲಿರುತ್ತಾರೆ.

ಪುರಂದರದಾಸರು

ಇರಬೇಕು ಇರಬೇಕು ಸಂಸಾರದಿ ಜನಕಾದಿ ರಾಜ ಋಷಿಗಳಂತೆ.

ಸರ್ವಜ್ಞ

ಅನ್ನವನು ಇಕ್ಕುವ ಅನ್ಯಜಾತನೆ ಕುಲಜ




ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು- ಸರ್ವಜ್ಞ

ಓಶೋ

ಕಾಮವಿದ್ದವನಿಗೆ ರಾಮನಿಲ್ಲ: ರಾಮನಿದ್ದವನಿಗೆ ಕಾಮವಿಲ್ಲ; ಕಾಮವನ್ನು ಗೆದ್ದವನು ರಾಮನನ್ನು ಗೆಲ್ಲಬಲ್ಲ.

ನಂಬಿಯಾರ್

ಚೆನ್ನಾಗಿ ಮುಚ್ಚಿಟ್ಟ ಪುಸ್ತಕ ಕೇವಲ ಒಂದು ಕಾಗದದ ಕಂತೆ.

ಸರ್ ಎಂ.ವಿ

ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.

ಪಂಚತಂತ್ರ

ಕೆಟ್ಟ ಮಾತಿನೊಡನೆ ಗೆಳೆತನವು ಕೊನೆಗೊಳ್ಳುತ್ತದೆ.

ಗೌತಮ ಬುದ್ಧ

ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ.

ಅಡಿಗರು

"ನಡೆದುಬಂದ ದಾರಿ ಕಡೆಗೆ ಹೊರಳಿಸಬೇಡ ಕಣ್ಣನು"

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ .

ಟಾಲ್ ಸ್ಟಾಯ್

ನಿರಾಸೆ ಮರಣದ ಮತ್ತೊಂದು ಹೆಸರು.

ಕನ್‌ಫ್ಯೂಷಿಯಸ್

ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.--ಕನ್‌ಫ್ಯೂಷಿಯಸ್

ವಿನೋಬಾ ಭಾವೆ





"ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ.
ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು."

ಸಿಗ್ಮಂಡ್ ಫ್ರಾಯ್ಡ್

ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

ತ್ರಿವೇಣಿ

ಹೆಂಡತಿ ಒಂದು ಕನ್ನಡಿ ಇದ್ದಂತೆ ,ಅದರಲ್ಲಿ ಕಾಣುವ ಪ್ರತಿಬಿಂಬವೇ ಪತಿ.

ಮಾಸ್ತಿ

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು

ಟಿ.ಪಿ.ಕೈಲಾಸಂ

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

ಅರಕಲಗೂಡು ನರಸಿಂಗರಾಯ ಕೃಷ್ಣರಾವ್ (ಅ. ನ.ಕೃ)


A. N. Krishna Rao
Born 9 May 1908
Kolar, Kolar district, Karnataka
Died 8 July 1971 (aged 63)
Bangalore, Karnataka
Pen name A Na Kru (ಅ.ನ.ಕೃ)
Occupation Writer
Nationality India
Genres Fiction

ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕು, ಮುಂದೆ ನೋಡಿ ಬದುಕಬೇಕು- ಅ. ನ.ಕೃ