ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

29 ನವೆಂಬರ್ 2011

ಸ್ವಾಮಿ ವಿವೇಕಾನಂದ

ವಿವೇಕಿಯಾದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ. --ಸ್ವಾಮಿ ವಿವೇಕಾನಂದ

ಮದರ್ ತೆರೇಸಾ

ನಿಮ್ಮ ಮನಸ್ಸಿನಲ್ಲಿರುವ ಕೀಳರಿಮೆ ಮತ್ತು ಭಯವನ್ನು ಕಿತ್ತೊಗೆದರೆ ನೀವು ಅದ್ಭುತವಾದುದನ್ನು ಸಾಧಿಸಲು ಸಮರ್ಥರಾಗುವಿರಿ. -ಮದರ್ ತೆರೇಸಾ

25 ನವೆಂಬರ್ 2011

22 ನವೆಂಬರ್ 2011

ಸ್ವಾಮಿ ವಿವೇಕಾನಂದ

ಏಳು ಎದ್ದೇಳು ನಿನಗಾಗಿ ಕಾಯುತ್ತಿದೆ ಒಂದು ಸುಂದರ ದಿನ .
ಒಳ್ಳೆಯ ಗುರಿಯತ್ತ ನಡೆ .ನಿರ್ಧಿಷ್ಟತೆಯ ಜೊತೆ ಓಡು ಸಾಧನೆಗಳ ಜೊತೆ ಹಾರಾಡು
ನಿನಗಾಗಿ ಕಾಯುತ್ತಿರುವ ಸುಂದರ ಬದುಕಿದೆ ಏಳು ಎದ್ದೇಳು
- ಸ್ವಾಮಿ ವಿವೇಕಾನಂದ 

18 ನವೆಂಬರ್ 2011

ವಿನೋಬಾ ಭಾವೆ

ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ.
ವಿನೋಬಾ ಭಾವೆ

ವಿನೋಬಾ ಭಾವೆ

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
— ವಿನೋಬಾ ಭಾವೆ

ವಿನೋಬಾ ಭಾವೆ

ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.
— ವಿನೋಬಾ ಭಾವೆ
Life is not about the people who act true to your face.

It is about the people who remain true even behind your back

10 ನವೆಂಬರ್ 2011

ಮದರ್ ಥೆರೇಸಾ



ಎದುರಿಗೆ ಕಾಣದ ಮನುಷ್ಯರನ್ನೇ ಗೌರವಿಸದಿದ್ದರೆ; ಕಾಣದ ದೇವರನ್ನು ಹೇಗೆ ಪ್ರಾರ್ಥಿಸಲು ಸಾಧ್ಯ. -ಮದರ್ ಥೆರೇಸಾ

ರೂಸೋ



ವಾಸ್ತವತೆಯ ಜಗತ್ತಿಗೆ ಮಿತಿಯುಂಟು, ಕಲ್ಪನೆಯ ಜಗತ್ತಿಗೆ ಮಿತಿಯಿಲ್ಲ.-ರೂಸೋ

ಮಹಾತ್ಮ ಗಾಂಧಿ

ಯಾವುದೇ ಸಂಸ್ಕೃತಿ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಳ್ಳದಿದ್ದರೆ ಅದು ಹೆಚ್ಚು ಕಾಲ ಉಳಿಯದು- ಮಹಾತ್ಮ ಗಾಂಧಿ

ಷೇಕ್ಸ್‌ಪಿಯರ್



ನನ್ನ ಮನದೊಳಗಿರುವ ಧೈರ್ಯವೇ ನನ್ನ ಮಿತ್ರ- ಷೇಕ್ಸ್‌ಪಿಯರ್

ಮದರ್ ಥೆರೇಸಾ

ಒಂಟಿತನ ಮತ್ತು ಬೇಡದವನಾಗಿ ಜೀವಿಸುವುದು ದಟ್ಟದಾರಿದ್ರ್ಯಕ್ಕಿಂತ ಅನುಭವಿಸುವ ಹಿಂಸೆ -- ಮದರ್ ಥೆರೇಸಾ

09 ನವೆಂಬರ್ 2011

ಆತ್ಮವಿಶ್ವಾಸ ಇಲ್ಲದವನು ನೆಪಗಳ ಸರದಾರನಾಗುತ್ತಾನೆ. ನೆಪಗಳು ತಾತ್ಕಾಲಿಕ ಶಮನ ಕೊಡಬಹುದಾದರೂ ಅದರ ನೆರಳಲ್ಲೇ ಶಾಶ್ವತ ಸಂಕಷ್ಟಗಳು ಟಿಸಿಲೊಡೆಯುತ್ತವೆ.ಹೀಗಾಗಿ ನೆಪಗಳನ್ನು ದೂರ ಸರಿಸಿ. ಆತ್ಮವಿಶ್ವಾಸ ಗಟ್ಟಿ ಮಾಡಿಕೊಳ್ಳಿ. ಉಜ್ವಲ ಭವಿಷ್ಯ ಕೈ ಹಿಡಿದು ಮುನ್ನಡೆಸುತ್ತದೆ.

04 ನವೆಂಬರ್ 2011




" We are Special to some one until they find another"
“Locks are never manufactured without a key. Similarly god never gives problems with out solutions only we need to have patience to unlock them.”

superb line of achievement::::to be "everest" don't be " ever at rest"

A Very true and genuine saying:

"Believe in what you know about me,

not in what you heard about me"
"ಶಿಸ್ತು ಬದ್ದ ಯೋಗಾಸನಗಳು ಮನುಷ್ಯನ ನರಮಂಡಲ ಹಾಗುಬುದ್ದಿಯನು ಚುರುಕುಗೊಳಿಸುತ್ತದೆ.ಮತ್ತು ಏಕಗ್ರಾತೆಗೂ ಇದು ಸಹಾಯಕಾರಿಯಗಿರುತ್ತದೆ."

02 ನವೆಂಬರ್ 2011



Impossible is just an opinion, but if you change your opinion, everything is Possible.
ಪರಸ್ಪರ ಮಾತುಕತೆಯಿಂದ ಯಾವ ಸಮಸ್ಯೆಯನ್ನಾದರೂ ಬಗೆಹರಿಸಿಕೊಳ್ಳಬಹುದು. ಬಹುತೇಕ ಸಂದರ್ಭಗಳಲ್ಲಿ ಮಾತುಕತೆಗೆ ಮುಂದಾಗದಿರುವುದರಿಂದಲೇ ಸಮಸ್ಯೆ ಉದ್ಭವವಾಗಿರುತ್ತದೆ.
ಮಾತನಾಡಲು ಬರದೆ ಇರುವುದರಿಂದಲೇ ಜಗಳವಾಗುತ್ತದೆ.

ವಾಲ್ಮೀಕಿ

ಯಾವುದೇ ಕೆಲಸವನ್ನೇ ಅಗಲಿ ಉತ್ಸಾಹದಿಂದ ಮಾಡಬಲ್ಲವನು ತನ್ನ ಗುರಿಯನ್ನು ಮುಟ್ಟದೇ ಇರಲಾರ. - ವಾಲ್ಮೀಕಿ
ಯಾರೋ ಬಂದು ನಮ್ಮ ದಾರಿಯನ್ನು ಮಾಡಿಕೊಡುವುದಿಲ್ಲ.
ನಮಗೆ ಬೇಕಾದ ದಾರಿಯನ್ನು ನಾವೇ ಮಾಡಿಕೊಳ್ಳಬೇಕು.
ಯಾಕೆಂದರೆ ನಾವು ತಲುಪುವ ಗುರಿ ಯಾವುದೆಂಬುದು ಬೇರೆಯವರಿಗೆ ಗೊತ್ತಿರುವುದಿಲ್ಲ.

01 ನವೆಂಬರ್ 2011

ದಿನದ ಕೊನೆಯಲ್ಲಿ ಉತ್ತಮ ಫಲಿತಾಂಶ ಬರಬೇಕೆಂದರೆ, ದಿನದ ಅರಂಭದಲ್ಲಿ ಕೆಲಸಕ್ಕೆ ಉತ್ತಮ ಚಾಲನೆ ಸಿಕ್ಕಿರಬೇಕು. ಆದ್ದರಿಂದ ಪ್ರತಿ ಮುಂಜಾನೆ ಆ ದಿನ ಮಾಡಬೇಕಾದ ಕೆಲಸಕ್ಕೆ ಶುಭಾರಂಭ ಕೊಡಿ. ಮಲಗುವ ಮುನ್ನ ನಿಮ್ಮಲ್ಲೊಂದು 
 ಸಾರ್ಥಕಭಾವ ಮೂಡಿರುತ್ತದೆ.